
- This event has passed.
ದೇವಸ್ಥಾನ ಭೇಟಿ
ಏಪ್ರಿಲ್ 13, 2024 - ಮೇ 23, 2024
-
ಗ್ರಾಮ ದೈವ – ಉಳ್ಳಾಕುಲು. ಏಪ್ರಿಲ್ ತಿಂಗಳಲ್ಲಿ ಕಾಲೇರಿ ಉಳ್ಳಾಕುಲು ದೈವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.
-
ಗ್ರಾಮ ದುರ್ಗಾ ದೇವಿ ಏಪ್ರಿಲ್ 22ರಂದು ದುರ್ಗಾ ದೇವಿ ದೇವಸ್ಥಾನ
-
ಗ್ರಾಮ ದೇವರು – ಮಹಾವಿಷ್ಣು. ಸಾಯಂಕಾಲ 6 ಗಂಟೆಗೆ ಮಂಡೆಕೋಲು ಮಹಾವಿಷ್ಣು ದೇವಸ್ತಾನಕ್ಕೆ ತೆರಳುತ್ತಿದ್ದೇವೆ.
-
ಸೀಮೆ ದೇವರು – ತೋಡಿಕಾನ ಮಲ್ಲಿಕಾರ್ಜುನ (ಏಪ್ರಿಲ್ 21) ತೋಡಿಕಾನ ದೇವಸ್ಥಾನ. ತೋಡಿಕಾನ ದೇವಸ್ತಾನಕ್ಕೆ ತೆರಳಿ ಕಳಸ ಅರ್ಪಿಸಿ, ಕುಟುಂಬದಲ್ಲಿ ಇರುವ ವಾಕ್ ದೋಷ ಪರಿಹಾರಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ.
ಇದೇ ವೇಳೆ ಕುಟುಂಬದ ಒಳ್ಳೆಯದಕ್ಕಾಗಿ ರುದ್ರಾಭಿಷೇಕವನ್ನು ನೆರವೇರಿಸಲಾಗಿದೆ. -
ಶ್ರೀ ಕ್ಷೇತ್ರ ಧರ್ಮಸ್ಥಳ. ಏಪ್ರಿಲ್ 16: ಇವತ್ತು ಸಾಯಂಕಾಲ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಕಳಸ ಅರ್ಪಿಸಲು ಹೋಗುತ್ತಿದ್ದೇವೆ. ಕುಟುಂಬದ ಕಲ್ಯಾಣ ಮತ್ತು ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಾಗುವುದು.
ಕುಟುಂಬದ ಪರವಾಗಿ ಕಳಸ ಒಪ್ಪಿಸಿ, ದೇವರ ದರ್ಶನ ಪಡೆದು ಧಾರ್ಮಿಕ ಕಾರ್ಯ ಪೂರ್ಣಗೊಂಡಿದೆ. ಕೇವಲ 40 ನಿಮಿಷಗಳಲ್ಲಿಯೇ ದರ್ಶನ ಪೂರ್ಣಗೊಂಡಿದ್ದು, ಇದು ದೈವದ ಮಹಾ ಕೃಪೆ ಎಂದು ನಾವು ನಂಬುತ್ತೇವೆ.
ಇದೇ ಮೂಲಕ ಕುಟುಂಬದ ಎಲ್ಲಾ ತರಹದ ವಾಕ್ ದೋಷ ಪರಿಹಾರವಾಗಿದೆ ಎಂದು ಭಗವಂತನಲ್ಲಿ ಪ್ರಾರ್ಥಿಸಿ, ಶಾಂತಿ ಮತ್ತು ಸುಖ ಸದಾ ನಮ್ಮೊಡನೆ ಇರಲಿ ಎಂದು ಆಶೀರ್ವಾದ ಪಡೆದಿದ್ದೇವೆ.
ಎಲ್ಲರಿಗೂ ಧರ್ಮದ ಸನಿಹದಲ್ಲಿರುವ ಶಕ್ತಿಯು ಸದಾ ಕೈ ಹಿಡಿಯಲಿ 🙏🏻
ಹೆಚ್ಚಿನ ವಿವರಗಳಿಗಾಗಿ WhatsApp ಅಥವಾ +91 99001 06608 ಗೆ ಕರೆ ಮಾಡಿ